ಕಟೀಲು ಯಕ್ಷಗಾನ ತತ್ಕಾಲ್ ಬುಕ್ಕಿಂಗ್ ವ್ಯವಸ್ಥೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜೂನ್ 30 , 2013
|
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಐದು ಯಕ್ಷಗಾನ ಬಯಲಾಟ ಮೇಳಗಳಿದ್ದರೂ ಮುಂದಿನ 25 ವರ್ಷಗಳ ತನಕ 10,000ಕ್ಕೂ ಮಿಕ್ಕಿ ಯಕ್ಷಗಾನ ಬಯಲಾಟಗಳು ಬುಕ್ಕಿಂಗ್ ಆಗಿದ್ದು, ಶೀಘ್ರದಲ್ಲಿ ಹರಕೆ ಬಯಲಾಟ ನೀಡುವ ಉದ್ದೇಶದಿಂದ ತತ್ಕಾಲ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಆಡಳಿತಾಧಿಕಾರಿ ಡಾ| ಹರೀಶ್ ಕುಮಾರ್ ತಿಳಿಸಿದ್ದಾರೆ. ಅವರು ಶನಿವಾರ ಕಟೀಲು ದೇವಳದಲ್ಲಿ ನಡೆದ ಆಡಳಿತ ಸಮಿತಿ ಸಭೆಯ ಬಳಿಕ ಮಾಹಿತಿ ನೀಡಿದರು.
ತತ್ಕಾಲ್ ಬುಕ್ಕಿಂಗ್ನಿಂದ ಬರುವ ಹೆಚ್ಚಿನ ಅದಾಯವನ್ನು ಮಕ್ಕಳಲ್ಲಿ ಯಕ್ಷಗಾನ ಕಲೆಯ ಬಗ್ಗೆ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಬಳಸಲಾಗುವುದು. ಪರಿಸರದ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುವ ಕಮ್ಮಟ ಮಾಡಲಾಗುವುದು ಹಾಗೂ ಕಲಾವಿದರಿಗೂ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಕಟೀಲಿನ ಮುಖ್ಯರಸ್ತೆ ಅಗಲಗೊಳಿಸುವುದಕ್ಕೆ ಭೂಮಿ ಕಳೆದುಕೊಳ್ಳುವವರು ನ್ಯಾಯಲಯ ಮೆಟ್ಟಿಲೇರಿದ ಪರಿಣಾಮ ಹಿನ್ನಡೆಯಾಗಿದ್ದು, ಜಾಗ ಕಳೆದುಕೊಳ್ಳುವವರನ್ನು ಕರೆದು ಸಭೆ ನಡೆಸಿ ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮುಂದಿನ ಗುರುವಾರ ಸಭೆ ನಡೆಸಲಾಗುವುದು.
ಕೃಪೆ : http://yashakarnataka.com
|
|
|